Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Celebration of 150th Birth Day of Mahatma Gandhi and Inaugural Function of Swachata Abhiyaan

ಮಂಗಳೂರು : ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇಂದು ಗಾಂದೀಜಿಯ 150 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ಒಂದು ತಿಂಗಳ ನಿರಂತರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲೆ ಹಾಗೂ ಕಾಲೇಜಿನ ಅಧ್ಯಾಪಕರು ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಕಾಲೇಜಿನ ಮುಂಭಾಗದಲ್ಲಿ ಸ್ವಚ್ಛತಾ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಭೋದಿಸಿದರು. ಈ ಸಂದರ್ಭದಲ್ಲಿ ಇಂದಿನಿಂದ ದಿನಾಂಕ ನವೆಂಬರ್ 2 ರ ತನಕ ಒಂದು ತಿಂಗಳ ಕಾಲ ನಿರಂತರ ಸ್ವಚ್ಛ ಶಕ್ತಿನಗರ, ಪ್ಲಾಸ್ಟಿಕ್ ಮುಕ್ತ ಶಕ್ತಿನಗರ ಎಂಬ ಪೋಷಣೆಯೊಂದಿಗೆ ಶಂಕರ ಅಭಿಯಾನದ ದ.ಕ ಜಿಲ್ಲಾ ಸಂಚಾಲಕರಾದ ಶ್ರೀಧರ ಶಾಸ್ತ್ರಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಯಾವ ಕಾಲಕ್ಕೂ ಬದಲಾಗದೆ ಇರುವಂತಹದ್ದು ಸತ್ಯ. ಸತ್ಯ, ನ್ಯಾಯ, ವಚನಬದ್ಧತೆ, ಆತ್ಮಶುದ್ಧಿ, ಅಹಿಂಸೆಗಾಗಿ ಹೋರಾಟವೇ ಸತ್ಯಗ್ರಹ ಇಂತಹ ತತ್ವವನ್ನು ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಅಳವಡಿಸಿ, ಪಾಲಿಸಿದ ಫಲವಾಗಿ ಇಡೀ ಜಗತ್ತೇ ಅವರೊಂದಿಗೆ ಹೋರಾಟಕ್ಕೆ ನಿಂತಿತು. ಅದರ ಫಲವಾಗಿ ನಾವು ಸ್ವತಂತ್ರರಾದೆವು. ಇಂದು ಭಾರತದೇಶಕ್ಕೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಜೊತೆಯಾಗಿವೆ ಅದು ನಾವು ಪಾಲಿಸುವ ಗಾಂಧೀ ತತ್ವದ ಕಾರಣಕ್ಕಾಗಿ ಎಂದರು.

ಅವರು ನಮ್ಮಲ್ಲಿ ಬಾಹ್ಯ ಶುದ್ಧಿ, ಸ್ವಚ್ಛತೆಯೊಂದಿಗೆ ಅಂತರಂಗ ಶುದ್ಧಿಯಾಗಬೇಕು. ಅದಕ್ಕಾಗಿ ಗಾಂಧೀಜಿಯವರು ಯೋಗ, ಧ್ಯಾನಗಳಲ್ಲಿ ತೊಡಗಿ ಜಗತ್ತಿಗೇ ಮಾದರಿಯಾದರು. ನೆಚ್ಚಿನ ಬಾಪು ಆದರು. ಅದೇರೀತಿ ನಾವು ಅವರ ಶಿಸ್ತು, ಅಹಿಂಸೆ, ಸತ್ಯ, ಸ್ವದೇಶಿ ತತ್ವ, ಮೊದಲಾದ ಗುಣಗಳನ್ನು ಭಾರತೀಯರಾದ ನಾವೆಲ್ಲರೂ ಅಳವಡಿಸಿ, ಸಜ್ಜನ ಸಮಾಜದಲ್ಲಿ ಸಜ್ಜನರಾಗಿ ಬದುಕುತ್ತ ಸ್ವಚ್ಛ ಭಾರತದಲ್ಲಿ ರಾಮ ರಾಜ್ಯವನ್ನು ಸೃಷ್ಟಿಸೋಣ ಎಂದು ಕರೆಯಿತ್ತರು.ಈ ಸಂದರ್ಭದಲ್ಲಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಭೋದಕೇತರ ಸಿಬ್ಬಂದಿಗಳು ಶ್ರೀ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಸ್ವಚ್ಛತೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ. ನಾೖಕ್‌ ಅಧ್ಯಕ್ಷತೆ ವಹಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಸಗುಣ ಸಿ. ನಾೖಕ್‌, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು. ಶಕ್ತಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್. ಸ್ವಾಗತಿಸಿದರು. ಅಧ್ಯಾಪಕಿ ಹರ್ಷಿತ ನಿರೂಪಿಸಿದರು, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಜಿ.ಕಾಮತ್ ವಂದಿಸಿದರು.